ಆತ್ಮೀಯರೇ,
ಫೆಬ್ರವರಿ 21 ಬುಧವಾರದಂದು ಶ್ರೀ ಸತ್ಯವತಿ ರಕ್ತೇಶ್ವರಿ ದೇವಸ್ಥಾನದಲ್ಲಿ ಶ್ರೀ ಅಮೃತೇಶ್ವರಿ ಮೇಳದವರಿಂದ ಯಕ್ಷಗಾನ ಬಯಲಾಟ
ಮಹಿಷಮರ್ದಿನಿ – ಚಕ್ರ ಚಂಡಿಕೆ
ವಿಶೇಷ ಆಕರ್ಷಣೆಯಾಗಿ
ಬಡಗಿನ ಸುಧನ್ವ ಎಂದೇ ಪ್ರಖ್ಯಾತವಾಗಿರುವ ಕೋಟ ಸುರೇಶ್ ಇವರು ಪ್ರಪ್ರಥಮ ಬಾರಿಗೆ ದೇವಿಯಾಗಿ ಕಾಣಿಸಿಕೊಳ್ಳಲಿದ್ದಾರೆ
ಹೆಣ್ಣನ್ನೇ ನಾಚಿಸುವಂತಹ ಸ್ತ್ರೀ ವೇಷದಾರಿ , ಬಡಗಿನ ಸ್ತ್ರೀ ವೇಷಗಳನ್ನು ಸಮರ್ಥವಾಗಿ, ಪ್ರಬುದ್ಧವಾಗಿ ನಿಭಾಯಿಸಬಲ್ಲ ಮಾಧವನಾಗೂರು ಇವರು ಪ್ರಪ್ರಥಮ ಬಾರಿಗೆ ಮಹಿಷಾಸುರನಾಗಿ ರಂಗದಲ್ಲಿ ವಿಜೃಂಭಿಸಲಿದ್ದಾರೆ.
ರವಿ ಕುಂಡ್ಲಿಯವರ ಭರ್ಭರಿಕನ ಹೆಜ್ಜೆಗೆ ,ಐದು ಚಂಡೆಗಳ ನಾದವನ್ನು ನುಡಿಸಲಿದ್ದಾರೆ ಜನಾರ್ಧನ್ ಆಚಾರ್ ಹಳ್ಳಾಡಿ.
ತಮ್ಮ ಬರುವಿಕೆಯ ನಿರೀಕ್ಷೆಯಲ್ಲಿ ನಾವೆಲ್ಲರೂ ಕಾಯುತ್ತಿದ್ದೇವೆ.