ಬೆಂಗಳೂರು: ಎಲ್ಲಾ ರೀತಿಯ ವೇಷಗಳನ್ನು ನಿರ್ವಹಿಸಬಲ್ಲ ಆಲ್ರೌಂಡ್ ಕಲಾವಿದ ಸುಮಾರು 42 ವರ್ಷಗಳಿಂದ ಧರ್ಮಸ್ಥಳ ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದ ಶ್ರೀ ಗಂಗಾಧರ ಪುತ್ತೂರು ನಿಧನರಾಗಿದ್ದಾರೆ. ನಿನ್ನೆಯ ರಾತ್ರಿ ಕುಕ್ಕೀತ್ತಾಯನ ವೇಷ ಮಾಡಿ ಬಣ್ಣ ತೆಗೆಯುತ್ತಿದ್ದಂತೆ ಹೃದಯಾಘಾತವಾಗಿ ಮೃತರಾದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಡಲಿ.
Visited 153 times, 1 visit(s) today








